ಬೆಂಗಳೂರ, ಜೂ. 30 : ಕರ್ನಾಟಕದ ಗಡಿ ಹಾಗೂ ನದಿಗಳಿಗೆ ಸಂಬಂಧಿಸಿದ ವಿವಾದಗಳ ವಿಷಯದ ಬಗ್ಗೆ ನಿರಂತರವಾಗಿ ಪರಿವೀಕ್ಷಿಸಲು ಕಾನೂನು, ನ್ಯಾಯ ಶಾಸನ ರಚನೆ ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲರನ್ನು ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಜವಾಬ್ದಾರಿ ವಹಿಸಲು ಸರ್ಕಾರ ಆದೇಶ ಹೊರಡಿಸಿದ್ದು ಸಚಿವ ಹೆಚ್.ಕೆ.ಪಾಟೀಲರ ಆಡಳಿತಕ್ಕೆ ಮತ್ತೊಂದು ಗರಿ ಮೂಡಿಸಿದಂತಾಗಿದೆ. ಆಡಳಿತ ಅನುಭವ, ಹಿರಿತನ ಮತ್ತು ನಾನು, ನುಡಿ, ಜಲ, ನೆಲ, ಭಾಷೆ ಸಂಬಂಧಿಸಿ ನಿರ್ವಹಿಸಿದ ರೀತಿ ಮತ್ತು ರಾಜ್ಯದ ಗಡಿ ರಾಜ್ಯದವರೊಡನೆ ಸಚಿವ ಹೆಚ್ಕೆ ಪಾಟೀಲರು ಹೊಂದಿರುವ ಉತ್ತಮ ಸಂಬಂಧದಿಂದ ರಾಜ್ಯಕ್ಕೆ ಸಹಾಯಕವಾಗಲಿದೆ ಎಂಬ ಲೆಕ್ಕಾಚಾರ ತಳ್ಳಿ ಹಾಕುವಂತಿಲ್ಲ.
© ASK News Kannada. All Rights Reserved. Designed by AGScurate IT Solutions LLP